‘ಬಾಂಬೆ ಮಿಠಾಯಿ’ ಕಳೆದ ವಾರ ಗುರು ಕಿರಣ್ ಅವರ ಹಾಡಿನೊಂದಿಗೆ ಸುದ್ದಿ ಮಾಡಿತ್ತು. ಈ ವಾರ ಇದೆ ಚಿತ್ರದಲ್ಲಿ ರಾಕ್ ಸ್ಟಾರ್ ಆರ್ ಜೆ ರೋಹಿತ್ ಅವರ ಚಿತ್ರೀಕರಣದ ಸುದ್ದಿ ಬಂದಿದೆ.
ಸಧ್ಯಕ್ಕೆ ‘ಬಿಗ್ ಬಾಸ್ ೨’ ಆಕರ್ಷಣೆ ಆಗಿರುವ ಆರ್ ಜೆ ರೋಹಿತ್ ಅಭಿನಯದ ವಿಷಯವನ್ನು ಚಿತ್ರ ತಂಡ ಗುಪ್ತವಾಗಿ ಇಟ್ಟುಕೊಂಡಿತ್ತು. ರೋಹಿತ್ ಅವರು ‘ಬಾಂಬೆ ಮಿಠಾಯಿ’ ಅಲ್ಲಿ ಮೂರು ದಿವಸಗಳ ಕಾಲ ಪೊಲೀಸ್ ಅಧಿಕಾರಿ ಆಗಿ ಕೆಲಸ ಮಾಡಿ ಆನಂತರ ‘ಬಿಗ್ ಬಾಸ್ ೨’ ಕಡೆ ತೊಡಗಿಸಿಕೊಂಡರು ಎಂದು ನಿರ್ದೇಶಕ ಚಂದ್ರಮೋಹನ್ ಅವರು ತಿಳಿಸಿದ್ದಾರೆ. ಚಿತ್ರ ತಂಡ ‘ಬಿಗ್ ಬಾಸ್ ೨’ ಸ್ಪರ್ಧಿ ರೋಹಿತ್ ಅವರು ಜಯಶಾಲಿ ಆಗಿ ಬರಲಿ ಎಂದು ಆಶಿಸುತ್ತದೆ.
ಬಾಂಬೆ ಮಿಠಾಯಿ’ ಸಿನಿಮಾದಲ್ಲಿ ಮೂವರು ಸಂಗೀತ ನಿರ್ದೇಶಕರ ಸಂಗಮ ಕೂಡ ಆಗಿದೆ ? ಸಿನಿಮಾದ ಸಂಗೀತ ನಿರ್ದೇಶಕರು ವೀರ ಸಮರ್ಥ, ಸಿನಿಮಕ್ಕೆ ಹಾಡು ಹೇಳಿರುವ ಸಂಗೀತ ನಿರ್ದೇಶಕರು ಗುರುಕಿರಣ್ ಹಾಗೂ ಹಾಡನ್ನು ಬರೆದಿರುವವರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಹ ಸಂಗೀತ ನಿರ್ದೇಶಕರು.
ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ ‘ಬಾಂಬೆ ಮಿಠಾಯಿ’ ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮೈಸೂರು, ಮಡಿಕೇರಿ, ಕುಶಾಲನಗರ, ಗೋಲ್ಡನ್ ಟೆಂಪಲ್, ಚಿಕ್ಕಮಗಳೂರು, ಕುದುರೆಮುಖ, ಕಳಸ ದೇವಸ್ಥಾನ, ಬಿಡಾಡಿ, ಮುರುಡೇಶ್ವರ, ಕಾರವಾರ, ಹುಬ್ಬಳ್ಳಿ, ಗದಗ್, ರಾಣಿ ಬೆನ್ನೂರ್, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ. ‘ಬಾಂಬೆಮಿಠಾಯಿ’ ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾದ ಚಿತ್ರ.
ನಿರಂಜನ್ ದೇಶ್ಪಾಂಡೆ, ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ಆರ್ ಜೆ ರೋಹಿತ್, ವಿಕ್ರಮ್, ಚಿಕ್ಕಣ್ಣ, ಕಿಶೋರಿ ಬಲ್ಲಾಳ್, ಸುನಿಲ್, ಬುಲ್ಲೆಟ್ ಪ್ರಕಾಶ್, ಮೈಕಲ್ ಮಧು, ಮೂಗು ಸುರೇಶ್, ನಲ್ಲೂರ್ ನಾರಾಯಣ್, ಬೇಬೀ ಬಿಂದುಶ್ರೀ ಇದ್ದಾರೆ.
ನಲ್ಲೂರ್ ನಾರಾಯಣ್ ಅವರು ಕಾರ್ಯನಿರ್ವಾಹಕ ನಿರ್ಮಾಪಕರು. ವೀರ್ ಸಮರ್ಥ ಅವರ ಸಂಗೀತ, ಆರ್ ಕೆ ಶಿವಕುಮಾರ್ ಅವರ ಛಾಯಾಗ್ರಹಣ, ಹರ್ಷ, ರಘು, ಕಲೈ ಅವರ ನೃತ್ಯ ನಿರ್ದೇಶನ, ವಿ ನಾಗೇಂದ್ರ ಪ್ರಸಾದ್, ನವೀನ್ ಕುಮಾರ್ ಹಾಗೂ ಹೃದಯ ಶಿವ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ.